Wednesday, June 19, 2013

Isshq tera....

ನಯವಾದರೂ, ಹಠವಾದಿಯಂತೆ
ಕಣ್ಣಲಿ ತೋರುವ ಬೆಳಕಿನ ಕಿರಣದಂತೆ
ಕೈಯಲ್ಲಿನ ಒಲವ ರೇಖೆಯಂತೆ Isshq tera....

ಆ ದಡದ ಹೂ ನೀನಾದರೆ, ಈ ದಡದ ನೀರು ನಾನಾಗುವೆ
ನಿನ್ನೆಡೆಗೆ ಒಲವ ಧಾರೆ ಎರೆಯಲು ನಾ ಹರಿಯುವೆ...
ಸೆಳೆಯುತ ನಿಂತಿದೆ (ನೋಡು)  Isshq tera....

ನಿಂತರೆ ಹತ್ತಿರ ಕರಗಿ ನಾ ಹೋಗುವೆ,
ಬಂಧಿಸುತ ನಿನ್ನಲಿ ಏಕೆ ನೀ ಓಡುವೆ... 
ಜೊತೆಯಲಿ ಎಂದಿಗೂ ನಾ ನಡೆಯುವೆ....
ನಡೆಯುತಾ ನಡೆಯುತಾ ದಾರಿಯ ಮರೆಯುವೆ...
ಎಲ್ಲಿಯೇ ಇದ್ದರೂ ತುಂಬುವೆ ಎದೆಗೆ ನೀ  Isshq tera....


Tuesday, April 16, 2013

ಸಂಸ್ಕೃತಿ

ಎಲ್ಲರಿಗೂ ಈ ಗಾದೆ ನೆನಪಿರಬೇಕು ಅಂದು ಬಸ್ ನಲ್ಲಿ ಪಯಣಿಸುತ್ತಾ ನನಗೆ ಆ ಗಾದೆಯ ನೆನಪಾಯಿತು 
 "ದೇಶ ಸುತ್ತಬೇಕು ಕೋಶ ಓದಬೇಕು " ಖಂಡಿತ ಈ ಮಾತು ಸತ್ಯ. ಅಂದು ಆಫೀಸ್ ಇಂದ ಬೇಗ ಹೊರಟಿದ್ದರಿಂದ ಬಸ್ ನಲ್ಲಿ ಪಯಣಿಸುತ್ತಿದ್ದೆ.

ನಾನು ಪಯಣಿಸುತ್ತಿದ್ದ ಆ ಬಸ್ BMTC ಯ ಕೊಡುಗೆ ಈ ಬೆಂಗಳೂರಿಗೆ, ಅದುವೇ ವಜ್ರ, ಅಥವಾ Volvo. ಬಸ್ ಪ್ರತಿ ಹಂತವನ್ನು ದಾಟಿ ಮುನ್ನಡೆಯುತಿತ್ತು , ಜೀವನದ ಪ್ರತಿ ಹೆಜ್ಜೆಯನ್ನು ನಾನು ಹೀಗೆ ಹಂತ ಹಂತವಾಗಿ ಸಾಗಬೇಕು ಎಂದು ಹೇಳಿದಂತಿತ್ತು .

ಕೋರಮಂಗಲ ಬಳಿ ಬಸ್ ಬಂದಾಗ  ವೃದ್ದ ದಂಪತಿಗಳು ಏರಿದರು, ಕನ್ನಡ ಭಾಷೆ ತಿಳಿಯದ ಅವರು ಬಸ್ಸಿನ ಚಾಲಕನನ್ನು ಇದು ಬನಶಂಕರಿ ಹೋಗುತ್ತದ್ದಾ ಎಂದು ಕೇಳಿದಾಗ ಆತ ಹೌದು ಎಂದು ಹೇಳಿ ಹತ್ತಿಸಿಕೊಂಡರು. 
ಬಸ್ ಹತ್ತಿದ ಮೇಲೆ ಇದರಲ್ಲಿ ಟಿಕೆಟ್ ನ ಬೆಲೆ ಹೆಚ್ಚಿರಬಹುದೆಂದು ಅನುಮಾನಿಸಿ ಚಾಲಕನನ್ನು ಕೇಳಿದಾಗ ಆತ  ಏನು ಉತ್ತರ ನೀಡದೆ ಒಳಗೆ ಹೋಗಲು ಸೂಚನೆ ನೀಡಿದ. ಅಲ್ಲಿದ ಕೆಲ ಹುಡುಗಿಯರು ಅವರಿಗೆ ತಮ್ಮ ಜಾಗವನ್ನು ಬಿಟ್ಟುಕೊಟ್ಟರು. ಟಿಕೆಟ್ ನೀಡಲು ಬಂದ ಕಂಡೆಕ್ಟರ್ ಅವರ ಬಳಿ ಇದ್ದ 30ರೂ ನೋಡಿ ಜೋರಾಗಿ ಎಲ್ಲರ ಮುಂದೆ ಈ ದುಡ್ಡಲ್ಲಿ ಇಲ್ಲಿ ಯಾವ ಟಿಕೆಟ್ ಸಿಗಲ್ಲ ಮೊದಲು ಈ ಬಸ್ ಇಂದ ಇಳೀರಿ ಎಂದು ಜೋರಾಗಿ ಮಾತಾಡಿದರು. 

ಅದನ್ನು ಕೇಳಿದೊಡನೆ ಅವರಿಗೆ ಭಯವಾಗಿ ಆ ವೃದ್ದ ದಂಪತಿಗಳು ಬಸ್ ನ ಮುಂದಿನ ಬಾಗಿಲ ಬಳಿ ಬಂದರು, ಆಗ ಚಾಲಕ ನಾನು ಮೊದಲೇ ಹೇಳಲಿಲ್ಲವೇ ಈ ಬಸ್ ನಿಮಗಲ್ಲ ಎಂದರು. ಆ ದಂಪತಿಗಳು ಸುಮ್ಮನೆ ನಕ್ಕರು. ಆ ನಗು ಆ ಭಾಷೆ ತಿಳಿಯದ ಕಾರಣ ಬಂದಿರಬಹುದು ಆದರೆ ಅಷ್ಟೆಲ್ಲಾ  ಬೈಗುಳ ಕೇಳಿದ ಮೇಲು ಅವರಲ್ಲಿ ಇದ್ದ ಆ ತಾಳ್ಮೆ ನಂಗೆ ಆಶ್ಚರ್ಯ ಉಂಟುಮಾಡಿತು. ಆಗ ಮುಂದೆ ಅಲ್ಲೇ ಇದ್ದ ತಿರುವಿನ ಬಳಿ ಬಸ್ ನಿಂತಿತು. ಆಗ ಆ ತಾತನ ಕೈ ಬಸ್ ನ ಹಿಡಿಗಳ ಮದ್ಯೆ ಸಿಕ್ಕಿಕೊಂಡಿತು. ಎಲ್ಲೊ ಅಡಗಿದ್ದ ಕೋಪ ನಾನು ಜೋರಾಗಿ ಕೂಗುವಂತೆ ಮಾಡಿತು,ಅವರ ಕೈ ನೋಡಿಕೊಂಡು ಬಾಗಿಲು ತೆರಿಯಿರಿ ಎಂದು ಜೋರಾಗಿ ಆ ಚಾಲಕನಿಗೆ ಹೇಳಿದೆ, ಆತನ ಉತ್ತರ ಮಾತ್ರ ತೇಲಿಸುವಂತೆ ಇತ್ತು, ಬಾಗಿಲ ಬಳಿ ಇರುವವರು ನೋಡಿ ಇಲಿಯಬೇಕೆ ವಿನಃ ನಾನು ಕಾರಣನಲ್ಲ ಎಂದು, ಆತನ ನೆರವಿಗೆ ಬಂದ ಕಂಡೆಕ್ಟರ್ ಕೂಡ ದಿನ ನಮಗೆ ಇದು ಮಾಮೂಲು, ಬೇಗ ಬೇಗ ಇಳಿಯಿರಿ ಎಂದಳು. 

ನಾನು ಅಷ್ಟು ಜೋರಾಗಿ ಮಾತಾಡಲು ಕಾರಣ ಅವರು ಬಸ್ ನಿಲ್ಲಿಸಿದ್ದ ಜಾಗ, ಅದು ಬಸ್ ನಿಲ್ಲುವ ಸ್ಥಳವಲ್ಲ 
,ಆ ದಂಪತಿಗಳಿಗೆ ಆ ಜಾಗದ ಪರಿಚಯವಿಲ್ಲ, ಹಾಗು ಕೂಡ ಅಲ್ಲಿ ಅವರನ್ನು ನಿರ್ದಾಕ್ಷಿಣ್ಯವಾಗಿ ಕೆಳಗೆ ಇಳಿಸಿದರು ಅದು ಮಾನವತೆಯ ಅಳಿಸಿದಂತೆ ಆಗಿತ್ತು. ನಾನು ಮುಂದಿನ ನಿಲ್ದಾಣದಲ್ಲಿ ಇಳಿಸಬಾರದೆ ಎಂದು ಕೇಳಿದ್ದಕ್ಕೆ ಅದು ಮುಂದಿನ ಹಂತ ಬೇಕಿದ್ದರೆ ನೀವೇ 20ರೂ ಕೊಟ್ಟು ಅವರಿಗೆ ಚೀಟಿ ಕರೀದಿಸಿ ಎಂದರು. ನಾನು ಏನು ಮಾಡಬೇಕು ಎಂದು ಯೋಚಿಸುವುದರ ಒಳಗೆ ಆ ವೃದ್ದರು ಬಸ್ ಇಳಿದು ಕೊಂಚ ಮುಂದೆ ನಡೆಯುತ್ತಿದ್ದರು, ಆಗ ಬಸ್ ತನ್ನ ಕದವನ್ನು ಮುಚ್ಚಿ ಕೊಂಡು ಆ ದಂಪತಿಯ ಮುಂದೆ ಸಾಗಿತು ಅವರು ನನ್ನನ್ನು 
ನೋಡಿದಾಗ ಆ ನೋಟ ನಾನು ಎದುರಿಸಲಾದೆ. ಅಂದು ನಾನು ಮಾಡಿದ್ದೂ ತಪ್ಪು ಎಂಬ ನೋವು ಇಂದಿಗೂ ಕಾಡುತ್ತಿದ್ದೆ. ಮನಸು ಅಂದು ನನ್ನ ಬುದ್ದಿಯ ಜೊತೆ ಕದನ ಮಾಡುತ್ತಿತ್ತು. ದಾರಿಯಲ್ಲಿ ನಾನು ಎಲ್ಲೋ ಸೋತುಹೋದಂತೆ ಭಾಸವಾಯಿತು. 

ನಮ್ಮ ಸಂಸ್ಕೃತಿ ಹಿರಿಯರ ಗೌರವಿಸುವುದು ಆದರೆ ಆ ಸಂಸ್ಕಾರ ಅಲ್ಲಿ ಯಾರಲ್ಲೂ ಉಳಿಯದೆ ಹೋಯಿತು.  ಆ ಕ್ಷಣ ನನ್ನ ಮನಸಿಗೆ ಬಂದದ್ದು ಇನ್ನು ಮುಂದೆ ಎಂದಾದರೂ ನಾನು ಈ ರೀತಿ ಪರೀಕ್ಷೆಗೆ ಒಳಗಾದರೆ ನಾನು ಯಾವುದೇ ವಿಧದಲ್ಲೂ ಯೋಚಿಸದೆ ಮನಸಿನ ಮಾತಿಗೆ ಓಗೊಡುವೆ. 




ಒಲವಿನ ಸೆರೆ

Humming .......


ಒಲವೇ  ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ ...
ಜೀವವೇ ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ .....

ನನ್ನ ಎದೆಯಲಿ ಹೊಸ ರಾಗವ  ನೀ ಮಿಡಿಯ ಬಂದೆಯೇನು?
ನನ್ನ ಎದೆಯಲಿ ಹೊಸ ಸ್ವರಗಳ ನೀ ಮಿಡಿಯ ಬಂದೆಯೇನು?
ನನ್ನ ಬದುಕಲಿ ಬಣ್ಣಗಳ ತಂದ ಕಾಮನ ಬಿಲ್ಲು ನೀನು...

ಒಲವೇ  ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ ....
ಜೀವವೇ ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ .....

ನೋವೇಲ್ಲಿದೆ (humming .......) ನೀ ಇರಲು ನನ್ನ ಜೊತೆಯಲ್ಲಿ...
ಬೇರೆಯೇನಿದೆ(humming .......)..... ನಿನ್ನ ಬಿಟ್ಟು ನನಗೆ ಈ ಜಗದಲ್ಲಿ....
ನನ್ನೊಳಗೆ...  ನೀ .... ನಿನ್ನೊಳಗೆ ನಾ ಇರಲು... (2)
ಜಗದ ಪ್ರತಿಯೊಂದು ಒಲವಲ್ಲೂ  ನಮ್ಮ ಗೆಲುವನ್ನು ಕಾಣಬಹುದು .. ....

 ಒಲವೇ  ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ ....

Darling every breath you take... Every move you make
I would be there with you.....
What would I do without you... I want to love you
Forever and ever and ever...

ಪ್ರೀತಿಯಲ್ಲಿ (humming .......) ಮರಣವೇ ಇಲ್ಲವಂತೆ...
ಸಾವಿನಸೆರೆಯಲ್ಲಿ(humming .......) ಬಂಧಿಯಾದರೆ ಅಮರಾರದಂತೆ ....
ಒಲವಿನ ಈ....  ಉದಯವ...  ಒಲವಿನ ಈ....   ಸಂಯಮವ
ಪ್ರತಿ ಕ್ಷಣದಲ್ಲೂ ನಿನ್ನಲ್ಲಿ ನಾನೀಗ ಕಾಣಬಲ್ಲೆ....

 ಒಲವೇ  ಓ ಪ್ರಾಣವೇ ಹೇಗೆ ನನಗೆ ನೀ ಜೊತೆಯಾದೆ ........

In tunes of tu mile dil khile from Criminal movie....

Wednesday, March 20, 2013

ಕಥೆ

ಮನಸಿನ ಮೌನಕೀಗ, ಮಾತಿನ ಅವಸರ
ಕಣ್ಣಿನ ಕನಸಿಗೆ, ಕಲ್ಪನೆಯ ಕಾತುರ
ಬಣ್ಣ ಬಣ್ಣದ ಜೀವನಕೆ, ನೆನಪಿನ ಹಂದರ
ಚೈತನ್ಯ ಭಾವ ಮೂಡಿಸುವ ಈ ಬದುಕಿಗೆ ನೀನೇ ಸುಂದರ

ಲೆಕ್ಕ ಇಡುತಿರುವೇ ಈಗ ನಾನು ಬಾನಿನ ಚುಕ್ಕಿಗಳ
ಕದ್ದು ಬರುತಾ ಸಿಕ್ಕಿ ಬಿದ್ದೆ ನಿನ್ನ ನಗುವಿನ ಮೌಲ್ಯಗಳ
ಸುಳಿಯಲಿ ಈಜುತಿರುವೆ ಸೇರಲು ನಿನ್ನ ಒಲವಿನ ಸರಳುಗಳ
ಸಣ್ಣ ಮುಗುಳುನಗೆ ಕಾಣಲು ನಿನ್ನ ಕಣ್ಣಿನ ಬೆಳಕುಗಳ .... ಒಮ್ಮೆಯಾದರೂ

ಹೇಗೋ ನುಡಿಯದೆ ನಡೆದ ವೈಮನಸ್ಸು , ಮನದ ವಿಷಮತೆಯ ಗುರುತು
ಬಾಡಿ ಹೋದ ಆ ನೆರಳು, ಮುಗಿಯದೆ ಹೋದ ಆ ಇರುಳು....
ಸಣ್ಣ ಕಹಿ ನೆನಪಿನ ಘಟನೆ, ಅಂಧಕಾರದ ಯಾತನೆ ...
ಬೇಡೆನಗೆ ಆ ಬದುಕಿನ ಬಣ್ಣನೆ ....

ನಡೆಯುತಾ ಆ ಜಡಿ ಮಳೆಯಲಿ, ಹೆಜ್ಜೆಗಳ ನಡುವಲಿ
ಕಳೆದುಹೋದ ಆ ದಿನವು ಬರಿದಾದ ಮನವು
ಹುಡುಕಲು ಪರಿಚಯದ ಸ್ವರಗಳು, ಈ ಭಾವನೆಗಳು ... 
ನೆನೆದ ಕಣ್ಣುಗಳು ಮಂಜಾದ ಮುಂಜಾವು.... ಕಥೆಯ ಕೊನೆಯ ಸಾರುತಿದೆ











Friday, February 1, 2013

ನೆನಪು - ನೋವು

ನೆನೆದು ನೆನೆದು ನಿನ್ನ ನಾನು, ಮನದ ದುಗುಡ ತಳ್ಳಲೇನು?
ಮನದಿ ಮುದುಡಿದ ಆಸೆ ಸ್ವರವ, ರಾಗವಿಲ್ಲದೇ ಆಲಾಪಿಸಲೇನು?
ಕಲ್ಪನೆ ಇರದೇ ಊಹಿಸಿ ನಾನು, ವರ್ಣಗಳಿಗ ರಚಿಸಲೇನು?
ಸೂಕ್ಷ್ಮ ಮನಸ ಅತೃಪ್ತಿ ನೋವಿನಿಂದ ಬಿಡುಗಡೆಗೊಳಿಸಲೇನು?

ತಳಮಳದ  ಸಣ್ಣ ಕಹಿ ನೆನಪು, ಒಲಿಮೆಯ ಎರೆದ ಆ ಕಂಪು
ಸಂತಸದ ರಾಗವ ಆಲಾಪಿಸಬೇಕಿದ್ದ ಆ ಹಾಡಿನ ಇಂಪು
ಗೊಂದಲದ ನಡುವಲಿ ಮೂಡಿದ ನುಡಿಗಳ ಜೋಂಪು
ಮಧುರತೆಯ ಜೊತೆಗೆ ನೀಡಿತ್ತು ಜೀವಕೆ ತಂಪು!!

ಸರಳವಾದ ಜೀವನಕೆ ಜನ್ಮಗಳ ಬಂಧನದ ಕಗ್ಗಂಟು
ನೋವು ನಲಿವಿನ ವಿವರಣೆಯ ನಿಗಂಟು
ಸುಂದರ ಬದುಕಿಗೆ ಸ್ವಾರ್ಥದ ಅಂಟು
ನಾ ಅರಿಯೆ ಇದು ಯಾವ ಬಗೆಯ ಸಂಚು

ನೊಂದ ಮನಸಿನ ಕ್ಷಣ ಕ್ಷಣದ ತಪನೆ ಅಶ್ರುಧಾರೆಯಲ್ಲಿ ಕಂಡ ಆ ಯಾತನೆ
ವಾಕ್ಯವಾಗಿ  ಕಾವ್ಯವಾಗಿ ಕೊನೆಗೆ ಉಳಿದ ನಿನ್ನ ಸ್ಮರಣೆ
ನೆನಪು - ನೋವು ಇದು ಮುಗಿಯದ ಬಣ್ಣನೆ!!
Creative Commons Licence
This work is licensed under a Creative Commons Attribution-ShareAlike 3.0 Unported License.