Monday, July 30, 2012

ಕವನ

ಮೆಲ್ಲನೆ ಮೂಡಿದ ಅವಿರತ ಕದನ
ಕಿರಿದಾದ ಮನದ ಕೋಟೆಯಲಿ ಆವರಿಸಿದ ಮೌನ
ಸಪ್ಪಳವ ಇಂಗಿಸಲು ಹೃದಯದ ತಪನ
ಬೆರಗಾಗಿ ನೋಡುತಿದೆ ನನ್ನನು ಈ ಜೀವನ!

ಮುಗ್ದ ಒಲವಲಿ ಆಕ್ರೋಶವೇಕೇ?
ಹಿಡಿದಿಡುತ ನಿನ್ನನು ನೀ ಬಂಧಿಸಬೇಕೆ?
ತಿಳಿಯಬೇಕಿದೆ ಈಗ ಮನದ ಆಂತರ್ಯ
ಸ್ಪರ್ಶಿಸುವಾಸೆ ಈ ಜೀವನದ ಸೌಂದರ್ಯ

ಮುಸುಕಿನ ಒಳಗಡೆ ಸೃಷ್ಟಿಯ ಕನಸು
ಸರಿ ಸಮವಲ್ಲ ಇದು ಬಂಧನದ ಸೊಗಸು
ಆಗಸದ ಎಡೆಗೆ ಏರಬೇಕು ಮಾಡು ಇದನು ನನಸು
ತೃಪ್ತಿ ಇರದು ಹಾಗಾದರೂ ಇದು ಮುಗ್ಹ ಮನಸು?

ಮೂಡಿ ಬರುವ ಮಧುರ ಆಲಾಪನೆ,
ನೀಗದೇಕೆ ಜೀವನದ ಸಣ್ಣ ಸಣ್ಣ ಆಕ್ಷೇಪಣೆ?
ಕಲ್ಮಶ ಪರಿಶುದ್ದತೆಯ ವಿಶ್ಲೇಷಣೆ
ಸುಪ್ತ ಭಾವನಾ ಲಹರಿಗೆ ಸಿಗಲು ಮನ್ನಣೆ 

No comments:

Post a Comment

Creative Commons Licence
This work is licensed under a Creative Commons Attribution-ShareAlike 3.0 Unported License.