Friday, June 22, 2012

ಹಸಿವು

ಹಸಿವು, ಹಸಿವೆಂದರೆ ನೋವು
ಹಸಿವೆಂದರೆ ರೋಧನ
ಆಲಾಪನೆ ಮಾಡದು ಹೊಟ್ಟೆ, ಆದರೂ ರಾಗದಿ ಬೆರೆತ ಸ್ವರ
ಹಹಹ!!! ನಗುವಿರೇಕೆ ನೀವು, ತಿಳಿದೀತೇ ನಿಮಗೆ ಅದರ ದುಃಖ

ದೇಹವು ದಣಿವುದೇಕೆ? ಆಹಾರದ ಬಯಕೆ ಏಕೆ?
ಪ್ರಕೃತಿ ನಿಯಮ ಇದು! ಬೇಡವೆಂದು ಜರಿದರು ಬಿಡುವುದುಂಟೆ ?
ಒಂದು ದಿನದ ಒಂದು ಸರದಿಯ ಮರೆತರೂ
ಇಷ್ಟೊಂದು  ಸುಡುವುದು ಒಳಗೆ ತಾನೇಕೆ?

ಕೋಪ ರೋಷದ ಕಿಚ್ಹ ಹೊರದೂಡುವುದು
ಮನದಲಿ ನಿರೀಕ್ಷಣೆಯ ದೀಪ ಹಚ್ಚುವುದು
ಕೊನೆಯ ತುದಿಯ ಸೇರಿ ಹೊಸ ಆಲೋಚನೆ ಹುಟ್ಟಿಸುವುದು
ಕಣ್ಣಲ್ಲಿ ಇಲ್ಲದ ಕನಸ ಹುಟ್ಟಿಸುವುದು!!


ಹಸಿವು, ಹಸಿವೆಂದರೆ ನೋವು
ಹಸಿವೆಂದರೆ ರೋಧನ

Monday, June 18, 2012

ದೂರ

ಏಕಾಂತವಾಗಿದೆ ಏಕೆ ಈ ಜಾಗಃ ಇಲ್ಲಿ ..... ನೀನು ಇಲ್ಲದೆ, ನನ್ನ ನೋಡದೆ
ಕತ್ತಲು ತುಂಬಿದೆ ನೋಡು ನೀನು ಇಣುಕದೆ ...... ಕನಸುಗಳು ಬೀಳದೆ
ನಾಲ್ಕು ಹೆಜ್ಜೆಯೂ ದೂರ ಎನಿಸಿದೆ...ನೀನು ಜೊತೆ ಬರದೇ...

ಕಾಣೆಯಾದೆ  ನಾನು ಈಗ ನೋಡು ನಿನ್ನದೇ ನೆನಪಿನಲ್ಲಿ
ಸುತ್ತುತಿಹುದು ನಿನ್ನ ನೆರಳು ದೂರ ಇದ್ದರು ನೀ ಅಲ್ಲಿ
ನಾನು ಕಳೆದು ಹೋಗುತಿರುವೆ ನೋಡು ನಿನ್ನದೇ ಧ್ಯಾನದಲ್ಲಿ
ಹೇಗೆ ಹೇಳಲಿ ಈ ತಳಮಳವ ಇಂದು ನಾನು ನಿನ್ನಲ್ಲಿ

ಹ್ರೀ ಎಂಬ ಜೇಂಕಾರ ನಿನ್ನ ಒಮ್ಮೆ ನೋಡಿದರೆ ಮೂಡಬಹುದೇನೋ
ನಿನ್ನಲ್ಲಿ ನಾನು ಸೇರಿ ಹೊಸ ರಾಗವನ್ನು  ಹಾಡಾಬೇಕಿನ್ನು !!

 ಬೆಳಗ್ಗೆ ಎದ್ದು ನೋಡಿದರೆ ಇಲ್ಲಿ ನಿನ್ನ ಉಪಸ್ಥಿತಿಯೇ ಇಲ್ಲ
ಮುತ್ತನಿಟ್ಟು  ನನ್ನ ತಬ್ಬಿಕೊಳ್ಳುವ ಕೈಗಳಿಗ ಮರೆಯಾಯಿತಲ್ಲಾ
ನಾನು ಸಿಂಗರಿಸಿಕೊಂಡರೂ  ನೋಡುವ ಕಣ್ಣು ಇಲ್ಲಿಲ್ಲಾ
ನಿನಗಾಗಿ ನಾ ಈಗ ಕಾಫಿ ಮಾಡಬೇಕಿಲ್ಲ

ಏಕೆ ಹೀಗೇಕೆ ನಮ್ಮ ನಡುವೆ ಬಂಧನ?
ನೀ ಇಲ್ಲಿ ನಾ ಅಲ್ಲಿ ಭೂಮಿ ಎರಡಂತೆ ಆಯಿತೀಗ!!
ನಿನ್ನ ನೆನಪಿನಲೇ ಈಗ ನನ್ನ ಸಮಯದ ಹೋರಾಟ
ಉಡುಗೊರೆಯ ನೀಡಿದೆ ನೀನು ನನಗೆ ಸಂಯಮದ ತೋಟ !!

Tuesday, June 12, 2012

ಕವಿ ಮನೆ


ಅದೊಂದು ಸುಂದರ ತಾಣ, ಅಲ್ಲಿ ಮೂಡಿತ್ತು ಮಧುರ ಗಾನ
ಕುಪ್ಪಳಿಸುತ್ತ ಅಲ್ಲಿಗೆ ತೆರೆಳ ಬೇಕಂತೆ, ಅದು ಆ ಜಾಗದ ಮಹತ್ತಂತೆ
ಮೋಡ ಬೆಟ್ಟಗಳ ಚುಂಬಿಸುವ ಜಾಗ, ಕಡಿಮೆಯಾದಿತು ನಾನು ಕರೆದರೆ ಅದನ್ನು ಸ್ವರ್ಗ
ಹಸಿರಿನ ಬನದ ಅಂಶ ಆ ಬನ, ಅಲ್ಲಿ ಮಹಾ ಕವಿಯ ಜನನ!

ಕೈಲಾಸ ಅದು ಕವಿತೆಗೆ ಸ್ಫೂರ್ತಿ, ಆ ಕವಿ ಸಾಧಿಸಿದ್ದು ಮಹಾನ್ ಕೀರ್ತಿ
ಈ ಶಿಖರ ಕವಿಗೆ ಅಚ್ಚುಮೆಚ್ಚು, ಅಲ್ಲಿ ಮುದ್ರಣವಾಗುತ್ತಿತ್ತು ಕವಿ ಬರವಣಿಗೆಯ ಅಚ್ಚು
ಗುಂಗುರು ಕೂದಲಿನ ಕವಿಗೆ ಆ ಕವಿತೆಗಳೇ ಜೀವಾಳ
ಇದನೆಲ್ಲಾ ಬಣ್ಣಿಸುತಿದೆ ಕವಿ ಶೈಲ

ಪ್ರದಕ್ಷಿಣೆ ಮಾಡಿದೆ ಕಣ್ಣೋತ್ತಿ ನಡೆದೇ ಆ ಕವಿಯ ಮನೆಗೆ,
ಜೀವಂತವಾಗಿ ಕಂಡರು ಆ ಕವನಗಳಲ್ಲಿ ನನಗೆ
ಮನೆಯಲ್ಲ ಅದು ಕವಿಯ ಕಾವ್ಯ ತಾಜಮಹಲು
ಮನದಲ್ಲಿ ಮುಡಿಸೂತ  ಕವನದ ಅಲೆಯ ಕಡಲು

ನನ್ನ ಹೃದಯ ಪೂರ್ವಕ ವಂದನೆಗಳು ನಿಮಗೆ
ಈ ಕವನ ರಾಷ್ಟ್ರ ಕವಿಯ ಪಾದಾರವಿಂದಗಳಿಗೆ
ಹರಸಿ ನಮ್ಮನು ಈ ಸಾಹಿತ್ಯವ ಬೆಳೆಸಲು
ಕನ್ನಡತಿಯ ಋಣ ತೀರಿಸಲು

Wednesday, June 6, 2012

ಒಲವು

ಮನದಾಳದ ಭಾವನೆಗೆ ನಾ ಪ್ರೀತಿಯ ಬಂಧಿಸಲೇ?
ಈ ಸ್ನೇಹ ಪಯಣದಲಿ ಜೊತೆಯೊಂದ ನಾ ಬೇಡಲೇ?
ಈ ಜೀವದ ಚಡಪಡಿಕೆ ನಾ ಹೇಗ್ ಹೇಳಲಿ?
ನೀ ಆಲಿಸು ಹೃದಯದ ಈ ಚಳುವಳಿ!!!

ಕಣ್ಣಲ್ಲಿ ಬಚ್ಚಿಟ್ಟ ಮಾತೊಂದ ನೀ ಅರಿತೆ
ಹೇಳದೆ ಕೇಳದೆ ಹೇಗೆ ನಾ ಮನಸೋತೆ?
ಒಲವಿನ ಸುತ್ತ ಹೆಣೆದ ಬೇಲಿಯ ಸುಳಿಯಲ್ಲಿ
ಮನಸಾರೆ ಆಲಿಸಿದೆ ನಾ ಒಲವ ಚಿಲಿಪಿಲಿ!!!
ಬಿಡುಗಡೆಯೇ ಬೇಡದ ಈ ಮೋಹಕೆ, ಪ್ರೇಮದ ಸುಧೆಯನ್ನು ನೀ ಹರಿಸಿದೆ

ಹಾರುತ್ತಾ ತೇಲುತ್ತಾ ಎಲ್ಲೆಲ್ಲೋ ಕಳೆದು ಹೋದೆ ನಾ
ಹೇಗೆಂದು ಬಣ್ಣಿಸಲಿ ಹೊಸದಾದ ಈ ಅನುಭವ
ನೋಡಿದ ಕಡೆಯಲ್ಲೆಲ್ಲಾ ಹೊಸದನ್ನೇ ಕಾಣುವೆನು
ನಿನ್ನೊಳಗೆ ಅವಿತು ನಾನು ನನ್ನೇ ಮರೆತೆನು
ಸಂತಸದ ಈ ಚೆಂದ ನೆನಪಿಗೆ ನನ್ನನ್ನೇ ನಾ ನಿನಗೆ ಧಾರೆ ಎರೆವೆ 


(In tunes of Yenendu hesaridali--- Anna bond movie )
Creative Commons Licence
This work is licensed under a Creative Commons Attribution-ShareAlike 3.0 Unported License.