Tuesday, March 15, 2011

ಪ್ರಕೃತಿ

ಹಸಿರು ಬೆಟ್ಟಗಳ ನಡುವಲಿ, ಬಾನಿನ ಅಂಚಿನ ಬೆಳಕಲಿ
ಸೌಂದರ್ಯ ತುಂಬಿದ ಪ್ರಕೃತಿಯಲಿ
ಕವಿಯ ಕವಿತೆಯ ಕದ ತೆರೆಯಲಿ
ಹೃದಯ ಮೀಟುವ ನಾದ ಜನರ ಮನ ಮುಟ್ಟಲಿ

ಸುಂದರ ಬದುಕು, ಸುಂಟರಗಾಳಿಗೆ ಸಿಲುಕದಿರಲಿ
ಪ್ರಕೃತಿ ಎಂದೆಂದೂ ನಗುತ ಇರಲಿ
ಚೈತ್ರದ ಕಂಪು ಎಲ್ಲೆಡೆ ತುಂಬಿರಲಿ
ತಣ್ಣನೆ ಸಿಹಿ ಗಾಳಿ ಉಲ್ಲಾಸವ ಹರಡಲಿ

ಇದು ಪರಿಸರದ ಎಚ್ಚರಿಕೆಯ ಘಂಟೆ
ಹರಡಲಿದೆ ವಿಷದ ಕಂತೆ
ಮಾನವ ಬದುಕುವದ ಕಲಿ
ಇದಲ್ಲ ನಿನ್ನ ಸಾಮ್ರಾಜ್ಯದ ಸಂತೆ

ಕಾಣದ ಲೋಕದ ಸಾಮ್ರಾಜ್ಯದ ಅರಸ
ಹಿಡಿದಿರುವ ನಮ್ಮ ಉಸಿರಿನ ಗಂಟ
ಹಾಳು ಮಾಡಿದಷ್ಟು ಆತನ ಆಸ್ತಿ
ಪಡೆವ ತಪ್ಪಿಗೆ ತಕ್ಕ ಶಾಸ್ತಿ!!!


Creative Commons Licence
This work is licensed under a Creative Commons Attribution-ShareAlike 3.0 Unported License.